ದಕ್ಷಿಣ ಭಾರತದ ದೇವಾಲಯಗಳ ಶಿಲ್ಪವೈಭವ, ಕಟ್ಟಡಗಳ ನಿರ್ಮಿತಿ, ಸರ್ವಾಭರಣ ಭೂಷಿತ ದೇವತಾ ಪ್ರತಿಮೆಗಳು, ಲಾಂಛನಧಾರಿಗಳಾದ ಅರ್ಚಕರ ಸಡಗರ, ಪೂಜೆ-ಆರತಿ-ಕಟ್ಟಲೆಗಳ ಆಡಂಬರ, ರುಚಿಯಾದ ಪ್ರಸಾದವಿನಿಯೋಗ- ಇವನ್ನೆಲ್ಲ ತಲೆಯಲ್ಲಿ ತುಂಬಿಕೊಂಡು ನೀವು ಉತ್ತರ ಭಾರತದ ದೇಗುಲಗಳತ್ತ ಹೊರಟರೆ ನಿರಾಶೆಯಾಗುವುದು ಖಂಡಿತ. ಸಾಧಾರಣವಾದ ಕಟ್ಟಡ, ಸರಳ ಅಲಂಕಾರದ ದೇವಬಿಂಬ, ಸಿವಿಲ್ ಡ್ರೆಸ್ಸಿನ ಪೂಜಾರಿಗಳು, ವಿಭಿನ್ನ ಶೈಲಿಯ, ಉಚ್ಚಾರಣೆಯ ಪೂಜಾಚರಣೆಗಳನ್ನು ಕಾಣುವಾಗ ದಾಕ್ಷಿಣಾತ್ಯ ಭಕ್ತರು ಸ್ವಲ್ಪ ತಬ್ಬಿಬ್ಬುಗೊಂಡರೆ ಅಚ್ಚರಿಯಿಲ್ಲ.
ಹಿಮಾಚಲ ಪ್ರದೇಶದ ಖ್ಯಾತ ಶಕ್ತಿಪೀಠಗಳಾದ ಬಜ್ರೇಶ್ವರಿ, ಚಾಮುಂಡಾ, ಜ್ವಾಲಾಜಿ ಹಾಗೂ ಚಿಂತಪೂರ್ಣಿ ದೇಗುಲಗಳನ್ನು ದರ್ಶಿಸುವಾಗ ನನಗೆ ಅನ್ನಿಸಿದ್ದೂ ಹೀಗೆಯೇ.
ಹಿಮಾಚಲ ಪ್ರದೇಶದ ಖ್ಯಾತ ಶಕ್ತಿಪೀಠಗಳಾದ ಬಜ್ರೇಶ್ವರಿ, ಚಾಮುಂಡಾ, ಜ್ವಾಲಾಜಿ ಹಾಗೂ ಚಿಂತಪೂರ್ಣಿ ದೇಗುಲಗಳನ್ನು ದರ್ಶಿಸುವಾಗ ನನಗೆ ಅನ್ನಿಸಿದ್ದೂ ಹೀಗೆಯೇ.
