ಟಿ.ಎಸ್. ಗೋಪಾಲ್
ಶಕ್ತಿದೇವತೆಯ ವಿವಿಧ ರೂಪಗಳಲ್ಲಿ ಸರಸ್ವತಿಯ ಹೆಸರೂ ಸೇರುತ್ತದೆ. ಆದಿಶಕ್ತಿಯ ವಿವಿಧ ರೂಪಗಳನ್ನು ಅರ್ಚಿಸುವ ನವರಾತ್ರಿಯ ಪೂಜಾವಿಧಿಗಳಲ್ಲಿ ಸರಸ್ವತೀಪೂಜೆಯೂ ಸಾಂಗವಾಗಿ ನೆರವೇರುತ್ತದೆ. ವಿದ್ಯಾದೇವಿಯ ಅವತಾರವಾದ ಸರಸ್ವತಿಯನ್ನು ವೇದಗಳಲ್ಲಿ ನದಿಯೆಂದೂ ದೇವತೆಯೆಂದೂ ಗುರುತಿಸಲಾಗಿದೆ. ಒಂದು ಕಾಲಕ್ಕೆ ನದಿಯಾಗಿ ಹರಿದು ಹರಿವನ್ನು ಬದಲಿಸುತ್ತಲೇ ಅಂತರ್ಧಾನಳಾದ ಸರಸ್ವತಿ ವಿದ್ಯಾದೇವತೆಯಾದ ಕಥೆಯನ್ನು ಕೇಳಿದ್ದೇವೆ.
ಹನ್ನೆರಡನೆಯ ಶತಮಾನದ ಒಂದು ಕನ್ನಡ ಶಾಸನ ಪದ್ಯ ಹೀಗೆ ಹೇಳುತ್ತದೆ: ಸಮಸ್ತ ಬ್ರಹ್ಮಾಂಡಗಳನ್ನು ಮಣಿಮಾಲೆಯಾಗಿ ಕೈಯಲ್ಲಿ ಧರಿಸಿ, ತನಗೆ ಶರಣುಬಂದವರಿಗೆ ಲೇಸನ್ನು ಬಯಸುತ್ತ ಯಾವ ದೇವಿಯು ಹಗಲಿರುಳೂ ಜಪಿಸುತ್ತಿರುವಳೋ ಆ ಸರಸ್ವತಿಯು ನಮ್ಮ ನಾಲಗೆಯಲ್ಲಿ ಸದಾ ನೆಲೆಸಿರಲಿ. ಸರಸ್ವತಿಯು ಸಕಲಜಗತ್ತಿಗೆ ಒಳಿತನ್ನು ಬಯಸುತ್ತಾ ಸದಾ ತಪೋನಿರತಳಾಗಿರುವ ಯೋಗಿನಿ ಎಂಬ ಈ ವರ್ಣನೆ ಶ್ರೇಷ್ಠ ಆದರ್ಶದ ಮಾದರಿಯನ್ನು ಮುಂದಿಡುತ್ತದೆ. ಹೊಯ್ಸಳಶಿಲ್ಪಗಳಲ್ಲಿ ಮೂಡಿಬಂದಿರುವ ಈ ಸಾತ್ವಿಕದೇವತೆಯ ರೂಪವೂ ಮೇಲಿನ ಶಾಸನಪದ್ಯಕ್ಕೆ ಅನುಗುಣವಾಗಿರುವುದನ್ನು ಕಾಣಬಹುದು.
ಮೊಸಳೆ ದೇಗುಲದ ಶಿಲ್ಪ |
ಹನ್ನೆರಡನೆಯ ಶತಮಾನದ ಒಂದು ಕನ್ನಡ ಶಾಸನ ಪದ್ಯ ಹೀಗೆ ಹೇಳುತ್ತದೆ: ಸಮಸ್ತ ಬ್ರಹ್ಮಾಂಡಗಳನ್ನು ಮಣಿಮಾಲೆಯಾಗಿ ಕೈಯಲ್ಲಿ ಧರಿಸಿ, ತನಗೆ ಶರಣುಬಂದವರಿಗೆ ಲೇಸನ್ನು ಬಯಸುತ್ತ ಯಾವ ದೇವಿಯು ಹಗಲಿರುಳೂ ಜಪಿಸುತ್ತಿರುವಳೋ ಆ ಸರಸ್ವತಿಯು ನಮ್ಮ ನಾಲಗೆಯಲ್ಲಿ ಸದಾ ನೆಲೆಸಿರಲಿ. ಸರಸ್ವತಿಯು ಸಕಲಜಗತ್ತಿಗೆ ಒಳಿತನ್ನು ಬಯಸುತ್ತಾ ಸದಾ ತಪೋನಿರತಳಾಗಿರುವ ಯೋಗಿನಿ ಎಂಬ ಈ ವರ್ಣನೆ ಶ್ರೇಷ್ಠ ಆದರ್ಶದ ಮಾದರಿಯನ್ನು ಮುಂದಿಡುತ್ತದೆ. ಹೊಯ್ಸಳಶಿಲ್ಪಗಳಲ್ಲಿ ಮೂಡಿಬಂದಿರುವ ಈ ಸಾತ್ವಿಕದೇವತೆಯ ರೂಪವೂ ಮೇಲಿನ ಶಾಸನಪದ್ಯಕ್ಕೆ ಅನುಗುಣವಾಗಿರುವುದನ್ನು ಕಾಣಬಹುದು.